ರಾಜ್ಯದಲ್ಲಿ ಲಕ್ಷಾಂತರ ಕೊಳವೆ ಬಾವಿಗಳಿವೆ. ಅವುಗಳಲ್ಲಿ ಬಹಳಷ್ಟು ಬತ್ತಿವೆ. ಕೊಳವೆ ಬಾವಿ ನಮ್ಮದಾದರೂ, ಅದರಲ್ಲಿರುವ ನೀರು ಮಾತ್ರ ಎಲ್ಲರಿಗೂ ಸೇರಿದ್ದು, ಕೊಳವೆ ಬಾವಿಯಿಂದ ನೀರು ತೆಗೆಯುವವರು ಮಳೆ ನೀರಿನ ಮೂಲಕ ಅದನ್ನು ಮರುಪೂರಣ ಮಾಡಬೇಕು.

ಜಲ ಮರುಪೂರಣಕ್ಕೆ ಬೇಕಾಗುವ ಸಾಮಗ್ರಿಗಳು
• ನೈಲಾನ್ ಪರದೆ
• ದಿಂಡು ಕಲ್ಲುಗಳು
• 40 ಮಿ.ಮೀ ಗಾತ್ರದ ಜೆಲ್ಲಿ (ದಪ್ಪ ಜೆಲ್ಲಿ)
•20 ಮಿ.ಮೀ ಗಾತ್ರದ ಬೇಬಿ ಜೆಲ್ಲಿ (ಸಣ್ಣ ಜೆಲ್ಲಿ)
•ಇದ್ದಲು
•ಮರಳು
ಜಲ ಮರುಪೂರಣ ವ್ಯವಸ್ಥೆ ಅಳವಡಿಸುವ ವಿಧಾನ
• ಕಡಿಮೆ ನೀರಿನ ಇಳುವರಿಯ ಅಥವಾ ಸಂಪೂರ್ಣವಾಗಿ ಬತ್ತಿರುವ ಕೊಳವೆ ಬಾವಿ ಆಯ್ಕೆ ಮಾಡಿಕೊಂಡು 3 ಮೀ. ಉದ್ದ, 3 ಮೀ ಅಗಲ, 3 ಮೀ ಆಳದ ಇಂಗು ಗುಂಡಿಯನ್ನು ಕೊಳವೆ ಬಾವಿ ಸುತ್ತ 27 ಘನ ಮೀ. ತೆಗೆಯುವುದು.
• ತಳದಿಂದ ಒಂದು ಮೀಟರ್ ಕೇಸಿಂಗ್ ಪೈಪ್ಗೆ ರಂಧ್ರಗಳನ್ನು ಮಾಡಿ ಅದಕ್ಕೆ ನೈಲಾನ್ ಪರದೆಯನ್ನು ಸುತ್ತಿ ಭದ್ರವಾಗಿ ಕಟ್ಟಿ, ನಂತರ ವಿವಿಧ ಬಸಿಯುವಿಕೆ ಮತ್ತು ಶುದ್ದೀಕರಣದ ಸಾಮಗ್ರಿಯನ್ನು ತುಂಬುವುದು.
• ಕೆಳಭಾಗದಿಂದ ದಪ್ಪನೆಯ ದಿಂಡು ಕಲ್ಲುಗಳನ್ನು 1.2 ಮೀ. ರವರೆಗೆ ತುಂಬಬೇಕು.
• ನಂತರ 40 ಮಿ.ಮೀ. ಗಾತ್ರದ ಜಲ್ಲಿ ಕಲ್ಲುಗಳನ್ನು 0.4 ಮೀಟರ್ ವರೆಗೆ ಹಾಗೂ 20 ಮಿ.ಮೀ ಗಾತ್ರದ ಜಲ್ಲಿ ಕಲ್ಲುಗಳನ್ನು 0.4 ಮೀಟರ್ ವರೆಗೆ ತುಂಬುವುದು.
• ನೀರಿನ ಶುದ್ದೀಕರಣಕ್ಕಾಗಿ ಇದ್ದಲು 0.1 ಮೀಟರ್ ಮತ್ತು ಮರಳು 0.7 ಮೀಟರ್ ಪದರವಾಗಿ ತುಂಬಬೇಕು.
• ಮರುಪೂರಣ ಸಾಮಗ್ರಿಗಳನ್ನು ಇಂಗು ಗುಂಡಿಗೆ ತುಂಬಿದ ಮೇಲೆ ಇಂಗು ಗುಂಡಿ ಸುತ್ತಲೂ ಕಲ್ಲುಗಳಿಂದ ಗೋಡೆ ನಿರ್ಮಿಸಿ ಸಿಮೆಂಟ್ ಕಾಂಕ್ರೀಟ್ನಿಂದ ಭದ್ರಗೊಳಿಸಿದರೆ ಇಂಗು ಗುಂಡಿಗೆ ಹರಿದುಬರುವ ಮಳೆ ನೀರು ನಿಲ್ಲುವುದಕ್ಕೆ ಅನುಕೂಲವಾಗುತ್ತದೆ.
• ಹರಿದು ಬರುವ ನೀರನ್ನು ಕಾಲುವೆ ಮೂಲಕ ಇಂಗು ಗುಂಡಿಯ ತೊಟ್ಟಿಗೆ ಹರಿಸಬೇಕು. ಗುಂಡಿಯಲ್ಲಿ ಸಂಗ್ರಹವಾದ ನೀರು ನಿಧಾನವಾಗಿ ಶೋಧಿಸಲ್ಪಟ್ಟು ಕೇಸಿಂಗ್ ಪೈಪ್ ಮುಖಾಂತರ ಒಳಹೊಕ್ಕು ನೀರಿನ ಸೆಲೆಯನ್ನು ಸೇರಿ ಅಂತರ್ಜಲದ ಮಟ್ಟ ಹೆಚ್ಚಿಸಲು ಸಹಕಾರಿಯಾಗುತ್ತದೆ.
• ಮರು ಪೂರಣ ಮಾಡಿದ ಮೇಲೆ ನೀರಿನ ಇಳುವರಿಯು ಆ ಪದೇಶದಲ್ಲಿ ಬಿದ್ದ ಮಳೆ ಹಾಗೂ ನೀರನ್ನು ಇಂಗಿಸಿದ ಣದ ಮೇಲೆ ನಿರ್ಧಾರವಾಗುತ್ತದೆ.
ಈ ವಿಷಯದ ಕುರಿತು ರೈತರಿಗೆ ಮಾಹಿತಿ ನೀಡಲಾಯಿತು.ಅದೇ ರೀತಿ ಕೊಳವೆ ಬಾವಿ ಜಲ ಮರುಪೂರಣ ಮಾಡುವ ವಿಧಾನವನ್ನು ತಿಳಿಸಿ ಗ್ರಾಮಸ್ಥರಲ್ಲಿ ಅರಿವು ಮೂಡಿಸಲಾಯಿತು.


