ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮಕ್ಕೆ ದೊಡ್ಡರಾಯಪ್ಪನಹಳ್ಳಿ ಗೆ ಆಗಮಿಸಿರುವ ಕೃಷಿ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಸಾಮಾನ್ಯ ಸಭೆಯಲ್ಲಿ ಮಣ್ಣಿನ ಮಾದರಿ ಸಂಗ್ರಹಣೆ ಹಾಗೂ ಬೀಜೋಪಚಾರ ದ ಕುರಿತಾಗಿ ಪದ್ಧತಿ ಪ್ರಾತ್ಯಕ್ಷಿಕೆಯನ್ನು ಮಾಡಿದರು.ಮಣ್ಣಿನ ಮಾದರಿ ಸಂಗ್ರಹಣೆಯ ಮಹತ್ವ ಹಾಗೂ ವಿಧಾನಗಳನ್ನು ರೈತರಿಗೆ ತಿಳಿಸಿದರು.ಜೊತೆಗೆ ಜೈವಿಕ ಗೊಬ್ಬರ ಹಾಗೂ ಜೈವಿಕ ಕೀಟನಾಶಕ ಗಳೊಂದಿಗೆ ಬೀಜೋಪಚಾರ ಬಗೆಗೆ ಮಾಹಿತಿ ತಿಳಿಸಿದರು.ರೈತರು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.ರೈತರಾದ ನಾಗರಾಜ್, ಹರ್ಷಿತ್,ಅಭಿಷೇಕ್…ಮುಂತಾದವರು ಇದ್ದರು.


